ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಟ ಮಂತ್ರ ಮಾಡಿಸಿ ಅಧಿಕಾರಕ್ಕೆ ಬರುವ ಮನಸ್ಥಿತಿ ಯಡಿಯೂರಪ್ಪಗಿಲ್ಲ: ವಿಜಯೇಂದ್ರ

Last Updated 8 ಡಿಸೆಂಬರ್ 2018, 11:51 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ‍್ರಯತ್ನಿಸುತ್ತಿಲ್ಲ. ಆಪರೇಷನ್ ಕಮಲ ಎನ್ನುವುದು ಕಾಂಗ್ರೆಸ್ ಪಕ್ಷವೇ ಸೃಷ್ಟಿಸಿರುವ ಸುಳ್ಳುಗಳ ಭೂತ’ ಎಂದು ಬಿಜೆಪಿ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಕೆಲವು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಭಿನ್ನಮತ ಚಟುವಟಿಕೆ ನಡೆಸಿದರೆ ಸರ್ಕಾರ ಬೀಳುತ್ತದೆ ಎಂದು ಜೆಡಿಎಸ್‌ ಮುಖಂಡರನ್ನು ಬೆದರಿಸಲು ಅವರು ‘ಆಪರೇಷನ್ ಕಮಲ’ ಎನ್ನುವ ಬೆದರುಗೊಂಬೆ ಸೃಷ್ಟಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಆಪರೇಷನ್ ಕಮಲ ಎನ್ನುವ ಸುಳ್ಳಿನ ಹಿಂದೆ ರಾಜ್ಯ ಕಾಂಗ್ರೆಸ್‌ನ ಮೂವರು ಮುಖಂಡರು ಇದ್ದಾರೆ. ಅವರು ಯಾರು ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದರು.

‘ವಾಮಾಚಾರ, ಮಾಟ ಮಂತ್ರ ಮಾಡಿಸಿ ಅಧಿಕಾರ ಹಿಡಿಯುವ ಮನಸ್ಥಿತಿಯನ್ನು ಯಡಿಯೂರಪ್ಪ ಅವರು ಹೊಂದಿಲ್ಲ. ಈ ರೀತಿಯ ಸುದ್ದಿಗಳನ್ನು ಬಿತ್ತರಿಸುವುದು ಯಡಿಯೂರಪ್ಪ ಅವರಿಗೆ ಮತ್ತು ಅವರ ಹೋರಾಟಕ್ಕೆ ಮಾಡುವ ಅಪಮಾನ. ಆರೋಗ್ಯ ಸುಧಾರಣೆಗಾಗಿ ಕೇರಳಕ್ಕೆ ಅವರು ಹೋಗಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT