ನಗರದ ವಿದ್ಯಾನಗರ ನಿವಾಸಿಯೊಬ್ಬರ ಹೆಸರಲ್ಲಿದ್ದ ಯಲ್ಲಾಪುರ ಗ್ರಾಮದ ನಿವೇಶನವನ್ನು ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆ ಮಾಡಿಕೊಡುವುದಾಗಿ ಹೇಳಿ, ತುಮಕೂರು ಗ್ರಾಮಾಂತರ ವ್ಯಾಪ್ತಿಯ ಕಂದಾಯ ನಿರೀಕ್ಷಕ ಕಚೇರಿಯ ಗ್ರಾಮ ಸಹಾಯಕ ಎಂ.ಎಚ್.ಕೆಂಪರಾಜು ₹5 ಸಾವಿರ ಲಂಚದ ಹಣವನ್ನು ಪಡೆದುಕೊಂಡು ಹಣದ ಸಹಿತ ಸಿಕ್ಕಿ ಬಿದ್ದಿದ್ದರು. ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸ್ ಉಪಾಧೀಕ್ಷಕ ಜೆ.ಮೋಹನ್ ತನಿಖೆ ಕೈಗೊಂಡಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಶೇಖರಪ್ಪ ಅಂತಿಮ ವರದಿಯನ್ನು ಸಲ್ಲಿಸಿದ್ದರು.