ತುಮಕೂರು: ಮತದಾನದ ಹಕ್ಕನ್ನು ದೌರ್ಜನ್ಯ, ಶೋಷಣೆ, ದಬ್ಬಾಳಿಕೆಯಿಂದ ಹೊರಬರುವ ಅಸ್ತ್ರವಾಗಿ ಬಳಸಬೇಕು ಎಂದು ಸ್ಲಂ ಜನಾಂದೋಲನಾ- ಕರ್ನಾಟಕದ ರಾಜ್ಯ ಘಟಕದ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.
ನಗರದ ವಂಚಿತ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ‘ವಂಚಿತ ಸಮುದಾಯಗಳು ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಉಳಿವಿಗಾಗಿ ನಮ್ಮ ಮತ’ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಿಂದ ಮಾತ್ರ ಶೋಷಿತರ ರಕ್ಷಣೆ ಸಾಧ್ಯ. ಆದರೆ, ಇತ್ತೀಚಿಗೆ ಅದನ್ನು ನಾಶಪಡಿಸುವ ಉನ್ನಾರ ನಡೆಯುತ್ತಿದೆ. ಹಾಗಾಗಿ ಮತದಾನವು ಬದಲಾವಣೆಯ ಅಸ್ತ್ರವಾಗಿ ಬಳಸುವುದರ ಮುಖಾಂತರ ನಮ್ಮ ವಿಮೋಚನೆಗಾಗಿ ಬಳಸಬೇಕು ಎಂದು ಕರೆ ನೀಡಿದರು.
ಕೊಳಗೇರಿ ಸಮಿತಿ ಉಪಾಧ್ಯಕ್ಷ ದೀಪಿಕಾ, ಕಾರ್ಯದರ್ಶಿ ಶೆಟ್ಟಾಳಯ್ಯ, ಮಾರಿಯಮ್ಮ ನಗರದ ಅಟೇಕರ್, ಕಣ್ಣನ್, ಮುರು, ಕೃಷ್ಣ, ರಾಜು, ಕಾಶಿರಾಜು, ಹೆಳ್ಳಾರ ಬಂಡೆಯ ಜಬೀರ್ ಇದ್ದರು.