ಹೊಸ ಕೊಳವೆಬಾವಿಗೆ ಜೂನ್ನಲ್ಲಿ ಆದೇಶ
ಟಾಸ್ಕ್ಫೋರ್ಸ್ ಅಡಿಯಲ್ಲಿ ತಾಲ್ಲೂಕಿಗೆ ಅಗತ್ಯವಾಗಿ ನೀರಿನ ಸಮಸ್ಯೆ ಇರುವ ಕಡೆ 8 ಕೊಳವೆಬಾವಿ ಕೊರೆಯಲು ಶಾಸಕರು ಅನುಮತಿ ನೀಡಿದ್ದಾರೆ. ಉಳಿದಂತೆ ನೀರಿನ ಸಮಸ್ಯೆ ಎದುರಾದ ಕಡೆ ಗ್ರಾಮ ಪಂಚಾಯಿತಿಯಿಂದ 14ನೇ ಹಣಕಾಸು ಯೋಜನೆ ಅಡಿ ಟ್ಯಾಂಕರ್ ಮೂಲಕ ನೀರು ಹರಿಸಿ ಸಮಸ್ಯೆ ಬಗೆಹರಿಸಲಾಗುವುದು. ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಇಲಾಖೆಗೆ ಜೂನ್ ನಂತರ ಆದೇಶ ಬರಲಿದೆ.
–ರಮೇಶ್, ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿಕ್ಕನಾಯಕನಹಳ್ಳಿ