ಗ್ರಾಮೀಣ ಭಾಗದ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಯೋಜನೆ ಬರಲಿದೆ. ಯಾವುದೇ ಕೆರೆಗಳಿಗೆ, ತಾಲ್ಲೂಕಿಗೆ ನೀರು ಹಂಚಿಕೆ ಆಗದಿರುವುದು ನಿಜಕ್ಕೂ ದುರಂತದ ಸಂಗತಿ. ರೈತರು, ಸಾರ್ವಜನಿಕರು, ಹೋರಾಟಗಾರರು ಅನೇಕ ಪ್ರತಿಭಟನೆ, ಹೋರಾಟ, ಪತ್ರ ವ್ಯವಹಾರ ಮಾಡಿದರೂ ಇಲ್ಲಿಯವರೆವಿಗೂ ಯಾವುದೇ ಪ್ರತಿಕ್ರಿಯೆಯು ಅಧಿಕಾರಿಗಳಿಂದ ದೊರೆತಿಲ್ಲ ಎಂದು ದೂರಿದರು.