ಶಾರದ ನಗರದಲ್ಲಿ ಗಾಳಿಯ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಕೂಡಲೇ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಸಾರ್ವಜನಿಕರ ಮಾಹಿತಿಯನ್ನು ಆಧರಿಸಿ ಬೆಸ್ಕಾಂ ಇಲಾಖೆಯ ಎಇಇ ಕೆ.ಪಿ.ಜಯಪ್ಪ ತಮ್ಮ ನೌಕರರೊಂದಿಗೆ ತಕ್ಷಣವೇ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.