<p>ವೈ.ಎನ್.ಹೊಸಕೋಟೆ (ಪಾವಗಡ):ತಾಲ್ಲೂಕಿನ ವೈ.ಎನ್. ಹೋಸಕೋಟೆಯಲ್ಲಿ ಶನಿವಾರ ಚೌಡೇಶ್ವರಿ ಜ್ಯೋತಿ ಉತ್ಸವ ವಿಜೃಂಭಣೆಯಿಂದ ನಡೆಯಿತು.</p>.<p>ಯುಗಾದಿ 3ನೇ ದಿನದಂದು ಚೌಡೇಶ್ವರಿ ದೇವಿಯ ಜ್ಯೋತಿಗಳ ಮೆರವಣಿಗೆಯನ್ನು ಗ್ರಾಮದ ಬೀದಿಗಳಲ್ಲಿ ನಡೆಸುವುದು ವಾಡಿಕೆ. ವಾದ್ಯವೃಂದ, ಕಲಾತಂಡಗಳೊಂದಿಗೆಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.</p>.<p>ಗ್ರಾಮದ ಒಳಿತಿಗಾಗಿ ತೊಗಟವೀರ ಕ್ಷತ್ರಿಯ ಸಮುದಾಯದವರು ಕುಲದೇವಿ ಚೌಡೇಶ್ವರಿ ಉತ್ಸವ ಮೂರ್ತಿ, ಕಳಸ, ಭಾನ, ಜ್ಯೋತಿಗಳೊಂದಿಗೆ ಪುರದಕಟ್ಟೆಯಿಂದ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಹಳೆಯ ಅಂಚೆಕಚೇರಿ ರಸ್ತೆ, ಎಸ್ಕೆಪಿಟಿ ರಸ್ತೆಯ ಮೂಲಕ ಅಶ್ವಥನಕಟ್ಟೆ ರಸ್ತೆಯಲ್ಲಿ ಸಾಗಿ ಚೌಡೇಶ್ವರಿ ದೇವಾಲಯದವರೆಗೆ ಮೆರವಣಿಗೆ ನಡೆಸಿದರು.</p>.<p>ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರು. ಜ್ಯೋತಿ ಹಾದುಬರುವ ದಾರಿಯುದ್ದಕ್ಕೂ ಶಾಮಿಯಾನ ಹಾಕಿಸಿ, ಮಜ್ಜಿಗೆ, ಷರಬತ್, ಪ್ರಸಾದ ವಿತರಿಸಿದರು. ಜೋಡಿ ಅಚ್ಚಮ್ಮನಹಳ್ಳಿಕಲಾವಿದರ ಕೋಲಾಟ, ಸಿದ್ಧಾಪುರ ಕಲಾವಿದರ ಡ್ರಮ್ಸ್ ಆಕರ್ಷಕವಾಗಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-17-227948297</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೈ.ಎನ್.ಹೊಸಕೋಟೆ (ಪಾವಗಡ):ತಾಲ್ಲೂಕಿನ ವೈ.ಎನ್. ಹೋಸಕೋಟೆಯಲ್ಲಿ ಶನಿವಾರ ಚೌಡೇಶ್ವರಿ ಜ್ಯೋತಿ ಉತ್ಸವ ವಿಜೃಂಭಣೆಯಿಂದ ನಡೆಯಿತು.</p>.<p>ಯುಗಾದಿ 3ನೇ ದಿನದಂದು ಚೌಡೇಶ್ವರಿ ದೇವಿಯ ಜ್ಯೋತಿಗಳ ಮೆರವಣಿಗೆಯನ್ನು ಗ್ರಾಮದ ಬೀದಿಗಳಲ್ಲಿ ನಡೆಸುವುದು ವಾಡಿಕೆ. ವಾದ್ಯವೃಂದ, ಕಲಾತಂಡಗಳೊಂದಿಗೆಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.</p>.<p>ಗ್ರಾಮದ ಒಳಿತಿಗಾಗಿ ತೊಗಟವೀರ ಕ್ಷತ್ರಿಯ ಸಮುದಾಯದವರು ಕುಲದೇವಿ ಚೌಡೇಶ್ವರಿ ಉತ್ಸವ ಮೂರ್ತಿ, ಕಳಸ, ಭಾನ, ಜ್ಯೋತಿಗಳೊಂದಿಗೆ ಪುರದಕಟ್ಟೆಯಿಂದ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಹಳೆಯ ಅಂಚೆಕಚೇರಿ ರಸ್ತೆ, ಎಸ್ಕೆಪಿಟಿ ರಸ್ತೆಯ ಮೂಲಕ ಅಶ್ವಥನಕಟ್ಟೆ ರಸ್ತೆಯಲ್ಲಿ ಸಾಗಿ ಚೌಡೇಶ್ವರಿ ದೇವಾಲಯದವರೆಗೆ ಮೆರವಣಿಗೆ ನಡೆಸಿದರು.</p>.<p>ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರು. ಜ್ಯೋತಿ ಹಾದುಬರುವ ದಾರಿಯುದ್ದಕ್ಕೂ ಶಾಮಿಯಾನ ಹಾಕಿಸಿ, ಮಜ್ಜಿಗೆ, ಷರಬತ್, ಪ್ರಸಾದ ವಿತರಿಸಿದರು. ಜೋಡಿ ಅಚ್ಚಮ್ಮನಹಳ್ಳಿಕಲಾವಿದರ ಕೋಲಾಟ, ಸಿದ್ಧಾಪುರ ಕಲಾವಿದರ ಡ್ರಮ್ಸ್ ಆಕರ್ಷಕವಾಗಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-17-227948297</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>