ಸಾಂಗ್ಲಿಯ ಚಂದುಕಾಕಾ ಜ್ಯುವೆಲ್ಲರ್ಸ್ನವರು, ಪುಣೆಯ ಮಿಥುನ್ ರಾಣಾ ಎಂಬ ಕುಶಲಕರ್ಮಿಯಿಂದ ಇದನ್ನು ಮಾಡಿಸಿಕೊಟ್ಟಿದ್ದಾರೆ. ಇದನ್ನು ಸಿದ್ಧಪಡಿಸಲು 22 ದಿನ ಬೇಕಾಯಿತಂತೆ. ರಾಮಚಂದ್ರ ಅವರು, ತಿಂಗಳ ಹಿಂದೆ ನಡೆದ ತಮ್ಮ ತಂದೆ–ತಾಯಿಯ 33ನೇ ಮದುವೆ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಇದನ್ನು ಬಳಸುವುದಕ್ಕೆ ಶುರು ಮಾಡಿದ್ದಾರೆ. ಮೊದಲಿಗೆ, ತಂದೆ ದತ್ತಾತ್ರೇಯ ಅವರಿಗೇ ಇದರಿಂದ ಕ್ಷೌರ ಮಾಡಿದ್ದಾರೆ.