ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿಯ ನರಸೀಪುರ ಬಳಿ ಹಿರೆಹಳ್ಳದಲ್ಲಿ ಗುರುವಾರ ಮೀನು ಹಿಡಿಯಲು ಹೋಗಿ ಕಣ್ಮರೆಯಾಗಿದ್ದ ಇಬ್ಬರು ಬಾಲಕರ ಮೃತದೇಹ ಶುಕ್ರವಾರ ಮುಂಜಾನೆ ಇಲ್ಲಿನ ಚೆಕ್ ಡ್ಯಾಮ್ನಲ್ಲಿ ಪತ್ತೆಯಾಗಿವೆ.
ಸಮೀಪದ ದೇವಪುರ ಕಾಲೊನಿಯ ಈರಣ್ಣನ ಪುತ್ರ ಪ್ರಜ್ವಲ್ (12), ಇದೇ ಗ್ರಾಮದ ಶಂಕರಪ್ಪನ ಪುತ್ರ ಜಯಂತ್(13) ಮೃತ ಬಾಲಕರು. ಪ್ರಜ್ವಲ್ 6 ನೇ ತರಗತಿ, ಜಯಂತ್ 7 ನೇ ತರಗತಿ ಓದುತ್ತಿದ್ದರು.
ಅಗ್ನಿ ಶಾಮಕ ಠಾಣೆ ಸಿಬಂದಿ, ಈಜುಗಾರರು ಹಾಗೂ ಗ್ರಾಮಸ್ಥರು ಹಳ್ಳದ ವ್ಯಾಪ್ತಿಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದ್ದರು.
ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.