ಹತ್ತು ವರ್ಷಗಳಲ್ಲಿ ತೆಗೆದಿರುವ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಉತ್ತರ ಭಾರತ, ನೇಪಾಳ, ರಾಜಸ್ಥಾನ, ತಮಿಳುನಾಡು ಸೇರಿದಂತೆ ದೇಶ–ವಿದೇಶಗಳಲ್ಲಿ ಸೆರೆ ಹಿಡಿದ ಛಾಯಾಚಿತ್ರಗಳು ಈ ಸಂಗ್ರಹದಲ್ಲಿವೆ. ಹೆಚ್ಚಿನ ಛಾಯಾಚಿತ್ರಗಳಲ್ಲಿ ಮನುಷ್ಯನ ಋಣಾತ್ಮಕ ಚಿಂತನೆಗಳ ಮಧ್ಯೆ ಆತನ ಧನಾತ್ಮಕ ಚಿಂತನೆಯನ್ನು ಬಿಂಬಿಸಲಾಗಿದೆ. ಸಮಾಜ ಮನುಷ್ಯನ ಧನಾತ್ಮಕ ದೃಷ್ಟಿಕೋನವನ್ನು ಸುಲಭವಾಗಿ ಗುರುತಿಸಲಿ ಎನ್ನುವುದೇ ಇದರ ಮೂಲ ಉದ್ದೇಶ ಎಂದು ಛಾಯಾಚಿತ್ರಕಾರ ಸಂತೋಷ್ ಪೈ ಹೇಳಿದರು.