ದಾಳಿ ವೇಳೆ ₹ 1.28 ಲಕ್ಷ ನಗದು, 23 ಫೈಲ್, ಒಂದು ರಿಜಿಸ್ಟರ್ ಪತ್ತೆಯಾಗಿದೆ. 2 ದಿನಗಳ ಹಿಂದೆ ಮಧುಕೇಶ್ವರ್ ವರ್ಗಾವಣೆಯಾಗಿದ್ದರು. ನೂತನ ಉಪ ವಿಭಾಗಾಧಿಕಾರಿ ರಾಜು ಅವರಿಗೆ ಅಧಿಕಾರವನ್ನೂ ಹಸ್ತಾಂತರ ಮಾಡಿದ್ದರು. ಆದರೂ, ವಸತಿ ಗೃಹದಲ್ಲಿ ಉಳಿದುಕೊಂಡು ಭೂವ್ಯಾಜ್ಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.