ಕೊರೊನಾ ಲಾಕ್ಡೌನ್ನಿಂದ ಉದ್ಯೋಗ ಆರ್ಥಿಕ ಸಮಸ್ಯೆ ಇದ್ದರೂ ಭತ್ತ ಬೇಸಾಯ ಕೃಷಿಯನ್ನು ಮಾಡಲೇಬೇಕು ಎಂಬ ಪಣತೊಟ್ಟ ಬಹುತೇಕ ಮಂದಿ ರೈತರು ಗದ್ದೆಗಿಳಿದಿದ್ದಾರೆ. ಕೊಣ, ಎತ್ತುಗಳು, ಟಿಲ್ಲರ್, ಟ್ರಾಕ್ಟರ್ ಬಳಸಿ ಗದ್ದೆಯ ಉಳುಮೆ ಆರಂಭವಾಗಿದೆ. ಜಾನುವಾರು ಗೊಬ್ಬರ, ತರಗಲೆ, ಸೊಪ್ಪು ಹಾಕಿ ಗದ್ದೆಯನ್ನು ಉಳುಮೆ ಮಾಡಿ ಹದಗೊಳಿಸುವುದು, ತರಕಾರಿ ಬೆಳೆ, ಅರಶಿನ ಬೆಳೆ ಸಹಿತ ಉಪಬೆಳೆ ನಾಟಿಗೆ ಸಿದ್ಧತೆ ನಡೆಯುತ್ತಿದೆ.