ದನ ಅಡ್ಡ ಬಂದಿದ್ದರಿಂದ ಅಪಘಾತ:ಅಪಘಾತದ ಕುರಿತು ಆಂಬುಲೆನ್ಸ್ ಚಾಲಕ ಪ್ರತಿಕ್ರಿಯೆ ನೀಡಿದ್ದು, ‘ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ರೋಗಿಯನ್ನು ಕರೆತರಲಾಗುತ್ತಿತ್ತು. ವಾಹನ ಶಿರೂರು ಟೋಲ್ ಕೇಂದ್ರದ ತುರ್ತು ಮಾರ್ಗದ ಸಮೀಪ ಬಂದಾಗ ಸಿಬ್ಬಂದಿ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದರು. ಆದರೆ, ತುರ್ತು ಮಾರ್ಗದಲ್ಲಿ ದನ ಅಡ್ಡಲಾಗಿ ಮಲಗಿದ್ದರಿಂದ ಅನಿವಾರ್ಯವಾಗಿ ಬ್ರೇಕ್ ಹಾಕಿದ್ದರಿಂದ ವಾಹನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿ ಅಪಘಾತಕ್ಕೀಡಾಯಿತು ಎಂದು ವಿವರಿಸಿದರು.