ಭಾನುವಾರ ಮಧ್ಯರಾತ್ರಿ 11.48ಕ್ಕೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಶ್ರೀಕೃಷ್ಣ ಮಠದಲ್ಲಿರುವ ತುಳಸಿಕಟ್ಟೆಗೆ ಶಂಖದ ಮೂಲಕ ಮೂರುಬಾರಿ ನೀರು, ತುಳಸಿ, ಹಾಲಿನ ಅರ್ಘ್ಯವನ್ನು ಸಮರ್ಪಿಸಲಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ನೆರೆದಿದ್ದರು. ಎಲ್ಲೆಡೆ ಕೃಷ್ಣನ ಜಯಘೋಷ ಮೊಳಗಿತು.