ಮಂಚಿಕುಮೇರಿಯ ಪ್ರವೀಣ್ ನಾಯ್ಕ ಬಂಧಿತ. ಆತನಿಂದ ₹ 9,000 ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಗುರುವಾರ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಲಲಿತಾ ನಾಯ್ಕ ಅವರ ಚಿನ್ನದ ಸರ ಕೀಳಲು ಯತ್ನಿಸಿ, ಕೈಗೆ ಸಿಕ್ಕ ಅರ್ಧ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ. ಈ ಸಂದರ್ಭ ಮಹಿಳೆಯು ಆರೋಪಿಯನ್ನು ಗುರುತಿಸಿ ಸ್ವಂತ ಊರಿನ ಪ್ರವೀಣ ನಾಯ್ಕ ಎಂಬಾತನೇ ಕೃತ್ಯ ಎಸಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು.