ಶಿವಯೋಗ ಮಂದಿರ (ಬಾದಾಮಿ): ‘ವೀರಶೈವ, ಲಿಂಗಾಯತ- ಎರಡೂ ಒಂದೇ. ಇದನ್ನು ಖಚಿತಪಡಿಸುವ ಸಲುವಾಗಿಯೇ ಇಲ್ಲಿ ರಾಷ್ಟ್ರೀಯ ವೀರಶೈವ ಲಿಂಗಾಯತ ಪರಿಷತ್ ಸ್ಥಾಪಿಸಲಾಗಿದೆ’ ಎಂದು ಶಿವಯೋಗ ಮಂದಿರದ ಅಧ್ಯಕ್ಷ ಡಾ. ಸಂಗನಬಸವ ಸ್ವಾಮೀಜಿ ಬುಧವಾರ ಇಲ್ಲಿ ಹೇಳಿದರು.
‘ಸರ್ಕಾರದ ಸೌಲಭ್ಯಕ್ಕಾಗಿ ಸಮಾಜ ಒಡೆಯುವ ಕಾರ್ಯ ನಡೆದಿದೆ. ಸಂಕುಚಿತ ಮನೋಭಾವ ಬಿಟ್ಟು ನಾವೆಲ್ಲರೂ ಒಂದಾಗಬೇಕು’ ಎಂದು ಅವರು ಹೇಳಿದರು.