ಉಡುಪಿಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನಂಜೆ, ಕಲ್ಮಾಡಿ, ಸುಬ್ರಹ್ಮಣ್ಯನಗರ, ಮೂಡುಬೆಟ್ಟು, ಗುಂಡಿಬೈಲು, ಪರ್ಕಳ, ತೆಂಕನಿಡಿಯೂರು, ಬಡಾನಿಡಿಯೂರು, ಕಲ್ಯಾಣಪುರ, ಆರೂರು ಸೇರಿದಂತೆ ಹಲವು ಕಡೆಗಳಲ್ಲಿ ಈ ವರ್ಷ 1,500 ಎಕರೆ ಹಡಿಲು ಭೂಮಿ ಕೃಷಿ ನಡೆದಿದ್ದು, ಎಲ್ಲ ಭಾಗಗಳಲ್ಲಿ ಸಾರ್ವಜನಿಕರು ಗದ್ದೆಗಳಲ್ಲಿ ದೀಪಾವಳಿ ಆಚರಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.