‘ಕಾಂಗ್ರೆಸ್ ಕಟ್ಟಿದ ಬಲಿಷ್ಠ ಭಾರತದ ಮೇಲೆ ನಿಂತು ಬಿಜೆಪಿ ದಬ್ಬಾಳಿಕೆ ಮಾಡುತ್ತಿದೆ. ಕೋಮು ದ್ವೇಷ ತುಂಬಿ ಜನರನ್ನು ಒಡೆದು ಆಳುತ್ತಿದೆ. ದೇಶಕ್ಕಾಗಿ ಕಾಂಗ್ರೆಸ್ ಸ್ಥಾಪಿಸಿದ ಎಲ್ಲವನ್ನೂ ಬಿಜೆಪಿ ಮಾರಾಟ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಇದ್ದ ಸ್ಥಿತಿಯೇ ಈಗ ಭಾರತದಲ್ಲಿ ಬಿಜೆಪಿಯ ಆಡಳಿತದಲ್ಲಿ ಕಾಣುತ್ತಿದ್ದೇವೆ. ಬಿಜೆಪಿಯಿಂದಾಗಿ ಭಾರತ 75 ವರ್ಷಗಳಷ್ಟು ಹಿಂದೆ ಹೋಗಿದೆ’ಎಂದರು. ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಚ್. ಜನಾರ್ದನ್, ಮಹಿಳಾ ಘಟಕದ ರಂಜನಿ ಹೆಬ್ಬಾರ್, ಸಂತೋಷ ನಾಯಕ್, ವಿಶು ಕುಮಾರ್ ಮುದ್ರಾಡಿ, ಹರೀಶ ಕುಲಾಲ್ ಇದ್ದರು.