ಈ ಸಂಬಂಧ ವಿ.ರಾಜಣ್ಣ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ನಾರಾಯಣ ಸ್ವಾಮಿ ಪ್ರತಿವಾದಿಯಾಗಿದ್ದಾರೆ. ಈ ರಿಟ್ ಅರ್ಜಿಗೆ ನಾರಾಯಣ ಸ್ವಾಮಿ ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ಈ ಆಕ್ಷೇಪಣೆ ಸುಳ್ಳು ಅಂಶಗಳಿಂದ ಕೂಡಿದೆ ಎಂದು ಸಿಟ್ಟಿಗೆದ್ದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರು, ನಾರಾಯಣ ಸ್ವಾಮಿಯನ್ನು ಹೈಕೋರ್ಟ್ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಿದರು. ನಾರಾಯಣ ಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಜರುಗಿಸುವಂತೆಯೂ ಆದೇಶಿಸಿದರು.