ಮಲ್ಪೆ ಸಮುದ್ರದ ಅಳಿವೆ ಬಾಗಿಲು ದ್ವೀಪ ಪ್ರದೇಶದಲ್ಲಿ ಮಾಲ್ತಿದೇವಿಯ ಶಕ್ತಿಸ್ಥಳವಿದ್ದು, ಮೀನುಗಾರರಿಗೆ ಸಂಕಷ್ಟ ಎದುರಾದಾಗ ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದುಕೊಂಡುಬಂದಿರುವ ಪದ್ಧತಿ. ಅದರಂತೆ, ಮೀನುಗಾರರು ಸುರಕ್ಷಿತವಾಗಿ ಮರಳಲಿ ಎಂದು ದೇವಿಗೆ ಪ್ರಾರ್ಥಿಸಲಾಯಿತು. ದೈವ ಕೂಡ ಅಭಯ ನೀಡಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.