ರಾಮಪ್ಪ ಕುಂದರ್ ಎಂಬುವರ ಪತ್ನಿ ಬೇಬಿ ಪೂಜಾರಿ ನಿಧನರಾಗಿದ್ದು, ಮಟ್ಟು ದೇವರಕುದ್ರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಭಾರಿ ಮಳೆಗೆ ಜಲಾವೃತಗೊಂಡಿತ್ತು. ಪರಿಣಾಮ ಗ್ರಾಮದೊಳಗೆ ವಾಹನ ಬರಲು ಅಡ್ಡಿಯಾಗಿತ್ತು. ಬಳಿಕ ಗ್ರಾಮಸ್ಥರೇ ನೆರೆಯ ನೀರಿನಲ್ಲಿ ಶವವನ್ನು ಹೊತ್ತು ವಾಹನದ ಬಳಿ ಕೊಂಡೊಯ್ದರು. ಬಳಿಕ ಕೋಟೆ ಗ್ರಾಮ ಪಂಚಾಯಿತಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.