<p><strong>ಉಡುಪಿ</strong>: ವೇದಾಂತದ ಲೇಪವಿಲ್ಲದೆ ಸಾಹಿತ್ಯವು ಪರಿಪೂರ್ಣವಾಗದು. ವೇದಾಂತ ಲೇಪವಿದ್ದರೆ ಹಿತದಿಂದ ಸಹಿತವಾದ ಸಾಹಿತ್ಯವಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.</p>.<p>ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಎ. ಕೇಶವರಾಜ್ ಅವರ ‘ಗೀತಾಂಬುಧಿ ಶ್ರೀಮದ್ಭಗವದ್ಗೀತಾ ಪ್ರೇರಿತ ಕಾವ್ಯ ಶಿಲ್ಪ’ ಕೃತಿಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.</p>.<p>ಸಾಹಿತ್ಯ ಎಂಬುದು ನಮ್ಮ ವ್ಯಕ್ತಿತ್ವವನ್ನು ಬೆಳೆಸುವ, ನಮ್ಮನ್ನು ಚಿಂತನೆಗೆ ಹಚ್ಚುವಂತಾಗಿರಬೇಕು. ಕೇಶವರಾಜ್ ಅವರ ಕೃತಿಯಲ್ಲಿ ವಿಜ್ಞಾನ, ಸಾಹಿತ್ಯ ಹಾಗೂ ಅಧ್ಯಾತ್ಮ ಮಿಳಿತವಾಗಿದೆ ಎಂದರು.</p>.<p>ಕವಿಯಾಗಬೇಕಾದರೆ ಕೇವಲ ಅಕಾಡೆಮಿಕ್ ಹಿನ್ನೆಲೆ ಇದ್ದರೆ ಸಾಲದು. ಲೋಕಜ್ಞಾನ ಮುಖ್ಯವಾಗಿರಬೇಕು. ಸಾಹಿತ್ಯ, ಕಲೆ ಮನುಷ್ಯ ಜೀವನದಲ್ಲಿ ಮೇಳೈಸಬೇಕು ಹಾಗಿದ್ದರೆ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಪ್ರತಿಪಾದಿಸಿದರು.</p>.<p>ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎಸ್. ಶೇರಿಗಾರ್ ಮಾತನಾಡಿ, ವಿಶ್ವದ ಪ್ರಸಿದ್ಧ ವಿಜ್ಞಾನಿಗಳು ತಾವು ಭಾರತೀಯ ವೇದಾಂತದಿಂದ ಪ್ರಭಾವಿತರಾಗಿರುವುದನ್ನು ತಮ್ಮ ಆತ್ಮಕಥೆಗಳಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಶಕ್ತಿ ವೇದಾಂತಕ್ಕೆ ಇದೆ ಎಂದು ಹೇಳಿದರು.</p>.<p>ಲೇಖಕಿ ಸಾಯಿಗೀತಾ ಹೆಗ್ಡೆ ಮಾತನಾಡಿ, ಕೇಶವರಾಜ್ ಅವರು ಗೀತೆಗಳ ಸತ್ವವನ್ನು ಕವನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವರ ಕವನಗಳು ಮನಸ್ಸಿಗೆ ಹತ್ತಿರವಾಗುವಂತಹದ್ದು ಎಂದರು.</p>.<p>ಕೃತಿಯ ಲೇಖಕ ಎ. ಕೇಶರಾಜ್ ಅವರು ಮಾತನಾಡಿದರು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಭಾಗವಹಿಸಿದ್ದರು. ವಿನುತಾ ಆಚಾರ್ಯ, ಸನ್ನತಿ, ಶಿಲ್ಪ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು.</p>.<p>ಇಂದು ಪ್ರತಿಯೊಬ್ಬರ ಜೀವನವೂ ದುಡಿಯುವುದು ಮತ್ತು ಹಣ ಸಂಪಾದನೆ ಮಾಡುವುದಕ್ಕೆ ಸೀಮಿತವಾಗಿದೆ. ಬದುಕಿನ ಅನೇಕ ಮಜಲುಗಳ ಕಡೆಗೆ ಗಮನ ಕಡಿಮೆಯಾಗುತ್ತಿದೆ </p><p><strong>- ಸುಗುಣೇಂದ್ರತೀರ್ಥ ಪುತ್ತಿಗೆ ಮಠಾಧೀಶ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ವೇದಾಂತದ ಲೇಪವಿಲ್ಲದೆ ಸಾಹಿತ್ಯವು ಪರಿಪೂರ್ಣವಾಗದು. ವೇದಾಂತ ಲೇಪವಿದ್ದರೆ ಹಿತದಿಂದ ಸಹಿತವಾದ ಸಾಹಿತ್ಯವಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.</p>.<p>ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಎ. ಕೇಶವರಾಜ್ ಅವರ ‘ಗೀತಾಂಬುಧಿ ಶ್ರೀಮದ್ಭಗವದ್ಗೀತಾ ಪ್ರೇರಿತ ಕಾವ್ಯ ಶಿಲ್ಪ’ ಕೃತಿಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.</p>.<p>ಸಾಹಿತ್ಯ ಎಂಬುದು ನಮ್ಮ ವ್ಯಕ್ತಿತ್ವವನ್ನು ಬೆಳೆಸುವ, ನಮ್ಮನ್ನು ಚಿಂತನೆಗೆ ಹಚ್ಚುವಂತಾಗಿರಬೇಕು. ಕೇಶವರಾಜ್ ಅವರ ಕೃತಿಯಲ್ಲಿ ವಿಜ್ಞಾನ, ಸಾಹಿತ್ಯ ಹಾಗೂ ಅಧ್ಯಾತ್ಮ ಮಿಳಿತವಾಗಿದೆ ಎಂದರು.</p>.<p>ಕವಿಯಾಗಬೇಕಾದರೆ ಕೇವಲ ಅಕಾಡೆಮಿಕ್ ಹಿನ್ನೆಲೆ ಇದ್ದರೆ ಸಾಲದು. ಲೋಕಜ್ಞಾನ ಮುಖ್ಯವಾಗಿರಬೇಕು. ಸಾಹಿತ್ಯ, ಕಲೆ ಮನುಷ್ಯ ಜೀವನದಲ್ಲಿ ಮೇಳೈಸಬೇಕು ಹಾಗಿದ್ದರೆ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಪ್ರತಿಪಾದಿಸಿದರು.</p>.<p>ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎಸ್. ಶೇರಿಗಾರ್ ಮಾತನಾಡಿ, ವಿಶ್ವದ ಪ್ರಸಿದ್ಧ ವಿಜ್ಞಾನಿಗಳು ತಾವು ಭಾರತೀಯ ವೇದಾಂತದಿಂದ ಪ್ರಭಾವಿತರಾಗಿರುವುದನ್ನು ತಮ್ಮ ಆತ್ಮಕಥೆಗಳಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಶಕ್ತಿ ವೇದಾಂತಕ್ಕೆ ಇದೆ ಎಂದು ಹೇಳಿದರು.</p>.<p>ಲೇಖಕಿ ಸಾಯಿಗೀತಾ ಹೆಗ್ಡೆ ಮಾತನಾಡಿ, ಕೇಶವರಾಜ್ ಅವರು ಗೀತೆಗಳ ಸತ್ವವನ್ನು ಕವನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವರ ಕವನಗಳು ಮನಸ್ಸಿಗೆ ಹತ್ತಿರವಾಗುವಂತಹದ್ದು ಎಂದರು.</p>.<p>ಕೃತಿಯ ಲೇಖಕ ಎ. ಕೇಶರಾಜ್ ಅವರು ಮಾತನಾಡಿದರು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಭಾಗವಹಿಸಿದ್ದರು. ವಿನುತಾ ಆಚಾರ್ಯ, ಸನ್ನತಿ, ಶಿಲ್ಪ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು.</p>.<p>ಇಂದು ಪ್ರತಿಯೊಬ್ಬರ ಜೀವನವೂ ದುಡಿಯುವುದು ಮತ್ತು ಹಣ ಸಂಪಾದನೆ ಮಾಡುವುದಕ್ಕೆ ಸೀಮಿತವಾಗಿದೆ. ಬದುಕಿನ ಅನೇಕ ಮಜಲುಗಳ ಕಡೆಗೆ ಗಮನ ಕಡಿಮೆಯಾಗುತ್ತಿದೆ </p><p><strong>- ಸುಗುಣೇಂದ್ರತೀರ್ಥ ಪುತ್ತಿಗೆ ಮಠಾಧೀಶ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>