ರೋಗಿಯ ಸಂಬಂಧಿಕರಿಗೆ ಕೈ ಮರುಪೂರಣ ಸಾಧ್ಯತೆಗಳನ್ನು ತಿಳಿಸಲಾಯಿತು. ಜತೆಗೆ, ಶಸ್ತ್ರಚಿಕಿತ್ಸೆಯಲ್ಲಿ ಎದುರಾಗುವ ಅಪಾಯಗಳನ್ನೂ ವಿವರಿಸಲಾಯಿತು. ಬಳಿಕ ಅವರ ಒಪ್ಪಿಗೆ ಪಡೆದು ಡಾ.ಕೆ.ಎನ್.ಜಯಕೃಷ್ಣನ್, ಡಾ.ಕೀರ್ತನ್, ಡಾ.ಚೇತನ್ ಅವರ ತಂಡ ಡಾ.ಅಶ್ವತ್ ಆಚಾರ್ಯ ಮತ್ತು ಪ್ರಾಧ್ಯಾಪಕರಾದ ಡಾ.ಎಸ್.ಪಿ.ಮೊಹಂತಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕೈ ಮರು ಜೋಡಣೆ ಮಾಡಿತು ಎಂದು ವೈದ್ಯರು ತಿಳಿಸಿದ್ದಾರೆ.