<p>ಬ್ರಹ್ಮಾವರ: ‘ಆನಂದ ಕುಂದರ್ ಸಮಾಜದ ದೊಡ್ಡ ಆಸ್ತಿ. ಅಂತಹ ವ್ಯಕ್ತಿಯ ಜನ್ಮದಿನ ಆಚರಿಸಿ ಆಶ್ರಮಗಳಿಗೆ ನೆರವು ನೀಡುವ ಕಾರ್ಯ ಪ್ರಶಂಸನೀಯ’ ಎಂದು ಚಿಂತಕಿ ಭಾರತಿ ವಿ. ಮಯ್ಯ ಶ್ಲಾಘಿಸಿದರು.</p>.<p>ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ನೇತೃತ್ವದಲ್ಲಿ ಸಮಾಜ ಸೇವಕ, ದಾನಿ ಆನಂದ್ ಸಿ. ಕುಂದರ್ ಅವರ 78ನೇ ಜನ್ಮದಿನ ಆಚರಣೆ, ಆಶ್ರಮಕ್ಕೆ ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆನಂದ ಅವರು ಸಮಾಜದ ಕಣ್ಣೀರು ಒರೆಸುವ ಶಕ್ತಿಯಾಗಿ ಬೆಳೆದಿದ್ದಾರೆ. ಕೋಟ ಭಾಗದ ಎಷ್ಟೋ ಅಶಕ್ತರು, ಅನಾರೋಗ್ಯ ಪೀಡಿತರಿಗೆ ಆಶ್ರಯದಾತರಾಗಿ ಅವರು ಮಾಡುತ್ತಿರುವ ಕಾಯಕಕ್ಕೆ ಪರ್ಯಾಯವಿಲ್ಲ’ ಎಂದರು.</p>.<p>ಮಟಪಾಡಿಯ ವಿಜಯ ಬಾಲನಿಕೇತನ ಅನಾಥ ಬಾಲಾಶ್ರಮಕ್ಕೆ ದಿನಸಿ ಪರಿಕರ ವಿತರಿಸಲಾಯಿತು. ಆನಂದ ಸಿ. ಕುಂದರ್ ಅವರು ಆಶ್ರಮದ ಸಂಯೋಜಕ ಜಯರಾಮ್ ಅವರಿಗೆ ಅವುಗಳನ್ನು ಹಸ್ತಾಂತರಿಸಿದರು. ಪರಿಸರ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.</p>.<p>ಕೋಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಭಾಗವಹಿಸಿದ್ದರು.</p>.<p>ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ ಕಾರ್ಯಕ್ರಮ ಸಂಯೋಜಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-28-1443962607</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ರಹ್ಮಾವರ: ‘ಆನಂದ ಕುಂದರ್ ಸಮಾಜದ ದೊಡ್ಡ ಆಸ್ತಿ. ಅಂತಹ ವ್ಯಕ್ತಿಯ ಜನ್ಮದಿನ ಆಚರಿಸಿ ಆಶ್ರಮಗಳಿಗೆ ನೆರವು ನೀಡುವ ಕಾರ್ಯ ಪ್ರಶಂಸನೀಯ’ ಎಂದು ಚಿಂತಕಿ ಭಾರತಿ ವಿ. ಮಯ್ಯ ಶ್ಲಾಘಿಸಿದರು.</p>.<p>ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ನೇತೃತ್ವದಲ್ಲಿ ಸಮಾಜ ಸೇವಕ, ದಾನಿ ಆನಂದ್ ಸಿ. ಕುಂದರ್ ಅವರ 78ನೇ ಜನ್ಮದಿನ ಆಚರಣೆ, ಆಶ್ರಮಕ್ಕೆ ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆನಂದ ಅವರು ಸಮಾಜದ ಕಣ್ಣೀರು ಒರೆಸುವ ಶಕ್ತಿಯಾಗಿ ಬೆಳೆದಿದ್ದಾರೆ. ಕೋಟ ಭಾಗದ ಎಷ್ಟೋ ಅಶಕ್ತರು, ಅನಾರೋಗ್ಯ ಪೀಡಿತರಿಗೆ ಆಶ್ರಯದಾತರಾಗಿ ಅವರು ಮಾಡುತ್ತಿರುವ ಕಾಯಕಕ್ಕೆ ಪರ್ಯಾಯವಿಲ್ಲ’ ಎಂದರು.</p>.<p>ಮಟಪಾಡಿಯ ವಿಜಯ ಬಾಲನಿಕೇತನ ಅನಾಥ ಬಾಲಾಶ್ರಮಕ್ಕೆ ದಿನಸಿ ಪರಿಕರ ವಿತರಿಸಲಾಯಿತು. ಆನಂದ ಸಿ. ಕುಂದರ್ ಅವರು ಆಶ್ರಮದ ಸಂಯೋಜಕ ಜಯರಾಮ್ ಅವರಿಗೆ ಅವುಗಳನ್ನು ಹಸ್ತಾಂತರಿಸಿದರು. ಪರಿಸರ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.</p>.<p>ಕೋಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಭಾಗವಹಿಸಿದ್ದರು.</p>.<p>ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ ಕಾರ್ಯಕ್ರಮ ಸಂಯೋಜಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-28-1443962607</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>