<p><strong>ಬ್ರಹ್ಮಾವರ</strong>: ಕಂದಾಯ ಇಲಾಖೆಯ ಅಧಿಕೃತ ಭೂ ದಾಖಲಾತಿ ವೆಬ್ಸೈಟ್ rtc.karnataka.gov.in ಸರಿಯಾಗಿ ಕಾರ್ಯನಿರ್ವಹಿಸದೆ ವಿವಿಧ ಭೂ ದಾಖಲಾತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.</p>.<p>ಈ ವೆಬ್ಸೈಟ್ ಮೂಲಕ ಸಾರ್ವಜನಿಕರು ತಮಗಿರುವ ತುರ್ತು ಕೆಲಸಗಳಿಗಾಗಿ ಅಥವಾ ದಾಖಲೆಗಳ ಪರಿಶೀಲನೆಗಾಗಿ ಲಾಗಿನ್ ಆಗಲು ಮುಂದಾದರೆ, ಸುರಕ್ಷತಾ ಒಟಿಪಿ ಮೊಬೈಲ್ಗೆ ಬರುವುದೇ ಇಲ್ಲ. ಗಂಟೆ ಗಟ್ಟಲೆ ಕಾದರೂ ಒಟಿಪಿ ಬಾರದೆ ಜನರು ತೊಂದರೆ ಅನುಭವಿಸಬೇಕಾಗಿದೆ.</p>.<p>ಕೆಲವೊಮ್ಮೆ ಲಾಗಿನ್ ಆದರೂ ಸರ್ವೆ ನಂಬರ್ ನಮೂದಿಸಲು ಸಾಧ್ಯವಾಗುವುದಿಲ್ಲ ಅಥವಾ ಪ್ರಿಂಟ್ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ವೆಬ್ಸೈಟ್ ವಾರದಲ್ಲಿ ಎರಡು ದಿನ ಸರಿಯಿದ್ದರೆ ಇನ್ನುಳಿದ ದಿನ ಕೆಲಸ ಮಾಡುವುದಿಲ್ಲ. ಸುಮಾರು ಒಂದು ತಿಂಗಳಿಂದ ಇದೇ ಸಮಸ್ಯೆ ಇದೆ ಎಂದು ಜನರು ದೂರಿದ್ದಾರೆ.</p>.<p>ತುರ್ತು ಸಾಲ ಸೌಲಭ್ಯ, ಜಮೀನು ಕ್ರಯ-ವಿಕ್ರಯ, ನ್ಯಾಯಾಲಯದ ಕೆಲಸಗಳಿಗೆ ಆರ್ಟಿಸಿ ಅಗತ್ಯವಿರುವ ರೈತರು ಮತ್ತು ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.</p>.<p>ಸಮಸ್ಯೆಗಳ ಬಗ್ಗೆ ಇಲಾಖೆಯ ಗಮನಕ್ಕೆ ತರಲು ಅಥವಾ ದೂರು ನೀಡಲು ಸಾರ್ವಜನಿಕರು ಮುಂದಾದರೆ ವೆಬ್ಸೈಟ್ ನಿರ್ವಹಣೆ ಮತ್ತು ಸಾರ್ವ ಜನಿಕರ ಕುಂದುಕೊರತೆ ಆಲಿಸಬೇಕಾದ ‘ಭೂಮಿ ಮಾನಿಟರಿಂಗ್ ಸೆಲ್’ ನ ದೂರವಾಣಿ ಸಂಖ್ಯೆಗಳೇ ಚಾಲನೆಯಲ್ಲಿಲ್ಲ. ಇದರಿಂದಾಗಿ ನಮ್ಮ ಅಳಲನ್ನು ಯಾರ ಮುಂದೆ ತೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.</p>.<div><blockquote>ತಂತ್ರಾಂಶ ಮೇಲ್ದರ್ಜೇಗೇರಿಸುವ ಅಥವಾ ಎಸ್ಎಂಎಸ್ ತಂತ್ರಾಂಶದಲ್ಲಿ ಏನಾದರೂ ಸಮಸ್ಯೆಯಾಗಿ ಈ ರೀತಿಯಾಗಿರಬಹುದು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು </blockquote><span class="attribution">ಭರತ್, ಭೂಮಿ ಸಮಾಲೋಚಕ</span></div>.<div><blockquote>ಕೃಷಿ ಚಟುವಟಿಕೆ ಮತ್ತು ಬಿತ್ತನೆ ಬೀಜ ಖರೀದಿಯ ಈ ಸಂದರ್ಭದಲ್ಲೇ ವೆಬ್ಸೈಟ್ ಕೈಕೊಟ್ಟಿರುವುದರಿಂದ ಬಳಕೆದಾರರಿಗೆ ಬಹಳ ಸಮಸ್ಯೆಯಾಗುತ್ತಿದೆ. ಶೀಘ್ರ ತಾಂತ್ರಿಕ ಸಮಸ್ಯೆ ಬಗೆಹರಿಸಿ </blockquote><span class="attribution">ರಾಘವೇಂದ್ರ ಐರೋಡಿ,, ಬಳಕೆದಾರರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ</strong>: ಕಂದಾಯ ಇಲಾಖೆಯ ಅಧಿಕೃತ ಭೂ ದಾಖಲಾತಿ ವೆಬ್ಸೈಟ್ rtc.karnataka.gov.in ಸರಿಯಾಗಿ ಕಾರ್ಯನಿರ್ವಹಿಸದೆ ವಿವಿಧ ಭೂ ದಾಖಲಾತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.</p>.<p>ಈ ವೆಬ್ಸೈಟ್ ಮೂಲಕ ಸಾರ್ವಜನಿಕರು ತಮಗಿರುವ ತುರ್ತು ಕೆಲಸಗಳಿಗಾಗಿ ಅಥವಾ ದಾಖಲೆಗಳ ಪರಿಶೀಲನೆಗಾಗಿ ಲಾಗಿನ್ ಆಗಲು ಮುಂದಾದರೆ, ಸುರಕ್ಷತಾ ಒಟಿಪಿ ಮೊಬೈಲ್ಗೆ ಬರುವುದೇ ಇಲ್ಲ. ಗಂಟೆ ಗಟ್ಟಲೆ ಕಾದರೂ ಒಟಿಪಿ ಬಾರದೆ ಜನರು ತೊಂದರೆ ಅನುಭವಿಸಬೇಕಾಗಿದೆ.</p>.<p>ಕೆಲವೊಮ್ಮೆ ಲಾಗಿನ್ ಆದರೂ ಸರ್ವೆ ನಂಬರ್ ನಮೂದಿಸಲು ಸಾಧ್ಯವಾಗುವುದಿಲ್ಲ ಅಥವಾ ಪ್ರಿಂಟ್ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ವೆಬ್ಸೈಟ್ ವಾರದಲ್ಲಿ ಎರಡು ದಿನ ಸರಿಯಿದ್ದರೆ ಇನ್ನುಳಿದ ದಿನ ಕೆಲಸ ಮಾಡುವುದಿಲ್ಲ. ಸುಮಾರು ಒಂದು ತಿಂಗಳಿಂದ ಇದೇ ಸಮಸ್ಯೆ ಇದೆ ಎಂದು ಜನರು ದೂರಿದ್ದಾರೆ.</p>.<p>ತುರ್ತು ಸಾಲ ಸೌಲಭ್ಯ, ಜಮೀನು ಕ್ರಯ-ವಿಕ್ರಯ, ನ್ಯಾಯಾಲಯದ ಕೆಲಸಗಳಿಗೆ ಆರ್ಟಿಸಿ ಅಗತ್ಯವಿರುವ ರೈತರು ಮತ್ತು ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.</p>.<p>ಸಮಸ್ಯೆಗಳ ಬಗ್ಗೆ ಇಲಾಖೆಯ ಗಮನಕ್ಕೆ ತರಲು ಅಥವಾ ದೂರು ನೀಡಲು ಸಾರ್ವಜನಿಕರು ಮುಂದಾದರೆ ವೆಬ್ಸೈಟ್ ನಿರ್ವಹಣೆ ಮತ್ತು ಸಾರ್ವ ಜನಿಕರ ಕುಂದುಕೊರತೆ ಆಲಿಸಬೇಕಾದ ‘ಭೂಮಿ ಮಾನಿಟರಿಂಗ್ ಸೆಲ್’ ನ ದೂರವಾಣಿ ಸಂಖ್ಯೆಗಳೇ ಚಾಲನೆಯಲ್ಲಿಲ್ಲ. ಇದರಿಂದಾಗಿ ನಮ್ಮ ಅಳಲನ್ನು ಯಾರ ಮುಂದೆ ತೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.</p>.<div><blockquote>ತಂತ್ರಾಂಶ ಮೇಲ್ದರ್ಜೇಗೇರಿಸುವ ಅಥವಾ ಎಸ್ಎಂಎಸ್ ತಂತ್ರಾಂಶದಲ್ಲಿ ಏನಾದರೂ ಸಮಸ್ಯೆಯಾಗಿ ಈ ರೀತಿಯಾಗಿರಬಹುದು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು </blockquote><span class="attribution">ಭರತ್, ಭೂಮಿ ಸಮಾಲೋಚಕ</span></div>.<div><blockquote>ಕೃಷಿ ಚಟುವಟಿಕೆ ಮತ್ತು ಬಿತ್ತನೆ ಬೀಜ ಖರೀದಿಯ ಈ ಸಂದರ್ಭದಲ್ಲೇ ವೆಬ್ಸೈಟ್ ಕೈಕೊಟ್ಟಿರುವುದರಿಂದ ಬಳಕೆದಾರರಿಗೆ ಬಹಳ ಸಮಸ್ಯೆಯಾಗುತ್ತಿದೆ. ಶೀಘ್ರ ತಾಂತ್ರಿಕ ಸಮಸ್ಯೆ ಬಗೆಹರಿಸಿ </blockquote><span class="attribution">ರಾಘವೇಂದ್ರ ಐರೋಡಿ,, ಬಳಕೆದಾರರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>