<p>ಬ್ರಹ್ಮಾವರ: ಕೋಡಿಕನ್ಯಾಣದ ಅಯೋಧ್ಯ ಫ್ರೆಂಡ್ಸ್ನ ಐದನೇ ವರ್ಷದ ಸಂಭ್ರಮದ ಅಂಗವಾಗಿ ನಡೆದ ’ಅಯೋಧ್ಯ ಉತ್ಸವ'ದ ಪ್ರಯುಕ್ತ ಕೋಡಿ ಕನ್ಯಾಣದಲ್ಲಿ ನಿರ್ಮಿಸಲಾದ ಶ್ರೀಮಹಾಸತೀಶ್ವರಿ ಆಟೊ ನಿಲ್ದಾಣವನ್ನು ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿದ ಅವರು, ಸಂಘಟನೆಗಳು ಸಮಾಜದ ಕಣ್ಣುಗಳಿದ್ದಂತೆ. ಅಯೋಧ್ಯಾ ಫ್ರೆಂಡ್ಸ್ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದರು.</p>.<p>ಸಮಾಜ ಸೇವಕ ಆನಂದ್ ಸಿ.ಕುಂದರ್ ಅವರ 78ನೇ ವರ್ಷದ ಜನ್ಮದಿನದ ಸವಿನೆನಪಿಗಾಗಿ ಅಯೋಧ್ಯ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.</p>.<p>ಅಯೋಧ್ಯಾ ಫ್ರೆಂಡ್ಸ್ ಪ್ರಮುಖರಾದ ಜಗನ್ನಾಥ್ ಅಮೀನ್, ರವೀಂದ್ರ ತಿಂಗಳಾಯ, ಸುರೇಂದ್ರ ಪೂಜಾರಿ ಕೋಡಿ, ಉದಯ್ ಕಾಂಚನ್, ತಿಮ್ಮ ಪೂಜಾರಿ, ಬಾಬು ಕಾಂಚನ್, ಸುದಿನಾ ಕೋಡಿ, ಸಂತೋಷ್ ಕೋಡಿ ಹಾಗೂ ಸಂಘದ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-28-1962537175</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ರಹ್ಮಾವರ: ಕೋಡಿಕನ್ಯಾಣದ ಅಯೋಧ್ಯ ಫ್ರೆಂಡ್ಸ್ನ ಐದನೇ ವರ್ಷದ ಸಂಭ್ರಮದ ಅಂಗವಾಗಿ ನಡೆದ ’ಅಯೋಧ್ಯ ಉತ್ಸವ'ದ ಪ್ರಯುಕ್ತ ಕೋಡಿ ಕನ್ಯಾಣದಲ್ಲಿ ನಿರ್ಮಿಸಲಾದ ಶ್ರೀಮಹಾಸತೀಶ್ವರಿ ಆಟೊ ನಿಲ್ದಾಣವನ್ನು ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿದ ಅವರು, ಸಂಘಟನೆಗಳು ಸಮಾಜದ ಕಣ್ಣುಗಳಿದ್ದಂತೆ. ಅಯೋಧ್ಯಾ ಫ್ರೆಂಡ್ಸ್ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದರು.</p>.<p>ಸಮಾಜ ಸೇವಕ ಆನಂದ್ ಸಿ.ಕುಂದರ್ ಅವರ 78ನೇ ವರ್ಷದ ಜನ್ಮದಿನದ ಸವಿನೆನಪಿಗಾಗಿ ಅಯೋಧ್ಯ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.</p>.<p>ಅಯೋಧ್ಯಾ ಫ್ರೆಂಡ್ಸ್ ಪ್ರಮುಖರಾದ ಜಗನ್ನಾಥ್ ಅಮೀನ್, ರವೀಂದ್ರ ತಿಂಗಳಾಯ, ಸುರೇಂದ್ರ ಪೂಜಾರಿ ಕೋಡಿ, ಉದಯ್ ಕಾಂಚನ್, ತಿಮ್ಮ ಪೂಜಾರಿ, ಬಾಬು ಕಾಂಚನ್, ಸುದಿನಾ ಕೋಡಿ, ಸಂತೋಷ್ ಕೋಡಿ ಹಾಗೂ ಸಂಘದ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260427-28-1962537175</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>