ಈಚೆಗೆ ಬೆಂಗಳೂರಿನ ಏರ್ ಶೋ ಸಂದರ್ಭ ಸಂಭವಿಸಿದ ಬೆಂಕಿ ದುರಂತದಲ್ಲಿ ಉಡುಪಿಯ ವಿಘ್ನೇಶ್ ಎಂಬುವರ ಕಾರು ಸುಟ್ಟು ಹೋಗಿತ್ತು. ಈ ಸಂಬಂಧ ತೆರಿಗೆಯಾಗಿ ಪಾವತಿಸಿದ್ದ ₹ 65,000 ಸರ್ಕಾರದಿಂದ ವಾಪಸ್ ಬರಬೇಕಿತ್ತು. ಈ ಹಣ ಬಿಡುಗಡೆಗೆ ಆರ್ಟಿಒ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ವಿಘ್ನೇಶ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.