ಉಡುಪಿ: ಲಂಚ ಸ್ವೀಕಾರ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಉಡುಪಿ ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್ ಹಾಗೂ ಆಪ್ತ ಮುನಾಫ್ ಅವರಿಗೆ ಸೋಮವಾರ ಉಡುಪಿ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಬಾರದು, ತನಿಖೆಗೆ ಅಧಿಕಾರಿಗಳಿಗೆ ಸಹಕರಿಸಬೇಕು, ಸಾಕ್ಷ್ಯಗಳನ್ನು ನಾಶಮಾಡಬಾರದು ಹಾಗೂ ತಲಾ ಇಬ್ಬರಿಂದ ತಲಾ ₹ 5 ಲಕ್ಷದ ಬಾಂಡ್ ಪಡೆದು ಬಿಡುಗಡೆ ಮಾಡಿದೆ.
ಬೆಂಕಿಗಾಹುತಿಯಾದ ಕಾರಿನ ತೆರಿಗೆ ಮರುಪಾವತಿ ಸಂಬಂಧ ವಾಹನ ಮಾಲೀಕರಿಂದ ₹ 4000 ಲಂಚ ಪಡೆಯುತ್ತಿದ್ದಾಗ ಎಆರ್ಟಿಒ ವರ್ಣೇಕರ್ ಹಾಗೂ ಆಪ್ತ ಮುನಾಫ್ ಅವರನ್ನು ಎಸಿಬಿ ಅಧಿಕಾರಿಗಳು ಮಾರ್ಚ್ 16ರಂದು ಬಂಧಿಸಿದ್ದರು.
ದಾಳಿ ವೇಳೆ ಎಆರ್ಟಿಒ ಅವರ ಮಂಗಳೂರಿನ ನಿವಾಸದಲ್ಲಿ ₹ 70 ಲಕ್ಷ ನಗದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು.