ಉಡುಪಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ರಾಜ್ಯ ಬಂದ್ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ಬಂದ್ನ ಛಾಯೆ ಕಾಣಲಿಲ್ಲ. ಪ್ರತಿಭಟನೆಗಳು ಕೂಡ ನಡೆಯಲಿಲ್ಲ.
ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಓಡಾಟ ಎಂದಿನಂತೆ ಇತ್ತು. ಆಟೊಗಳ ಸಂಚಾರವೂ ಇತ್ತು. ತರಕಾರಿ, ಹೂ, ಹಣ್ಣು ಮಾರುಕಟ್ಟೆಗಳು, ಅಂಗಡಿ ಮುಂಗಟ್ಟು, ಹೋಟೆಲ್ಗಳುಎಂದಿನಂತೆ ತೆರೆದಿದ್ದವು.