ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೆ ನುಗ್ಗಿದ ಕಾರು: ಮಗು ಪಾರು

Last Updated 6 ಫೆಬ್ರುವರಿ 2021, 13:31 IST
ಅಕ್ಷರ ಗಾತ್ರ

ಹಿರಿಯಡಕ: ಉಡುಪಿ ಜಿಲ್ಲೆಯ ಹಿರಿಯಡಕ ಕೊಂಡಾಡಿ ಭಜನೆ ಕಟ್ಟೆ ಬಳಿ ಶನಿವಾರ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮನೆಯೊಳಗೆ ನುಗ್ಗಿದ್ದು, ತೊಟ್ಟಲಿನಲ್ಲಿದ್ದ ಮಗು ಅದೃಷ್ಟವಶಾತ್ ಪಾರಾಗಿದೆ.

ಸ್ಥಳೀಯ ನಿವಾಸಿ ಸಾಧು ಶೆಟ್ಟಿ ಅವರ ಮಗ ಹರೀಶ್ ಶೆಟ್ಟಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಬ್ಬ ಪಾದಚಾರಿ ಕೂಲಿ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ‌ ಎಂದು ತಿಳಿದು ಬಂದಿದೆ. ಹುಂಡೈ ಐ ಟ್ವೆಂಟಿ ಕಾರು ಚಾಲಕನ ನಿಯಂತ್ರಣ ತಪ್ಪಿ, ಕೊಂಡಾಡಿ ಪುತ್ತು ನಾಯಕ್ ಅವರ ಮನೆಗೆ‌ ಡಿಕ್ಕಿ ಹೊಡೆದಿದೆ. ಮನೆಯ ತೊಟ್ಟಲಿನಲ್ಲಿ ಪುತ್ತು ನಾಯಕ್ ಅವರ ಮೊಮ್ಮಗು‌ ಇತ್ತು ಎನ್ನಲಾಗಿದೆ. ಮಗು‌ ಅಪಾಯದಿಂದ ಪಾರಾಗಿದ್ದು, ಮನೆಗೆ‌ ಹಾನಿಯಾಗಿದೆ‌. ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT