ಶನಿವಾರ ನಸುಕಿನಲ್ಲಿ ಪರ್ಯಾಯ ಮೆರವಣಿಗೆ ಸಾಗುತ್ತಿದ್ದಂತೆ ಹಿಂದಿನಿಂದ ಪೌರಕಾರ್ಮಿಕರು ಹಾಗೂ ಪಿಪಿಸಿ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಸ್ವಚ್ಛತಾ ಪರಿಕರಗಳೊಂದಿಗೆ ಸಜ್ಜಾದರು. ಮೆರವಣಿಗೆ ಸಾಗಿದ ಕಿನ್ನಿಮೂಲ್ಕಿ, ಜೋಡುಕಟ್ಟೆ, ಕೋರ್ಟ್ ರೋಡ್, ತೆಂಕಪೇಟೆ ರಸ್ತೆ, ರಥಬೀದಿ ಹಾಗೂ ಕೆಎಸ್ಆರ್ಟಿಸಿ, ಸಿಟಿ, ಸರ್ವಿಸ್ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿದರು.