ಹೆಬ್ರಿ: ಮುನಿಯಾಲು ವರಂಗ ಪಡುಕುಡೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಭಾರತ್ ಜೋಡೊ ಕಾರ್ಯಕ್ರಮಕ್ಕೆ ತೆರಳುವ ಕುರಿತು ಪೂರ್ವ ತಯಾರಿಯ ಸಭೆ ಸೋಮವಾರ ಚಟ್ಕಲ್ಪಾದೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ, ಪಕ್ಷ ಸಂಘಟನೆ ಮತ್ತು ಭಾರತ್ ಜೋಡೊ ಕಾರ್ಯಕ್ರಮವನ್ನು ಕಾರ್ಯಕರ್ತರು ಸೇರಿ ಯಶಸ್ವಿಗೊಳಿಸಲು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಮಾತನಾಡಿದರು. ಮುಖಂಡರಾದ ಲಕ್ಷ್ಮಣ ಆಚಾರ್, ಪಡುಕುಡೂರು ಜಗದೀಶ ಹೆಗ್ಡೆ, ವರಂಗ ಶಂಕರ ಶೆಟ್ಟಿ, ಉದಯ ನಾಯ್ಕ್, ಪ್ರಕಾಶ ದೇವಾಡಿಗ ಮತ್ತಿತರರು ಇದ್ದರು.