2020 ಜ.18ರಂದು ನಡೆಯಲಿರುವ ಪರ್ಯಾಯ ಮಹೋತ್ಸವ ಸಂದರ್ಭ ಮಠಕ್ಕೆ ಅಗತ್ಯವಿರುವಷ್ಟು ಅಕ್ಕಿ, ತರಕಾರಿ, ಬಾಳೆ ಹಣ್ಣು, ಬಾಳೆಎಲೆಗಳನ್ನು ಮಧ್ಯವರ್ತಿಗಳಿಂದ ಖರೀದಿಸದೆ ನೇರವಾಗಿ ರೈತರಿಂದಲೇ ಪಡೆಯುವ ಕಾರ್ಯಕ್ಕೆ ಕೈಹಾಕಿದ್ದಾರೆ. ಅದಮಾರು ಮಠದ ಶ್ರೀಗಳ ಸಂಕಲ್ಪಕ್ಕೆ ರೈತರು ಕೂಡ ಕೈಜೋಡಿಸಿದ್ದು, ಬೆಳೆದ ಬೆಳೆಯನ್ನು ನೇರವಾಗಿ ಮಠಕ್ಕೆ ತಂದು ನೀಡಲಿದ್ದಾರೆ.