ಕಟಪಾಡಿಯ ರಂಗಕಲಾವಿದ ನಾಗೇಶ್ ಕಾಮತ್ ಅವರ ಪುತ್ರ ಪ್ರಥಮ್ ಕಾಮತ್ ಆಮೆಮಣ್ಣಿನ ಕಲಾಕೃತಿಯಲ್ಲಿ ಕೋವಿಡ್–19 ವೈರಸ್ ಮಾದರಿಗಳನ್ನು ರಚಿಸಿ ಪಿಡುಗನ್ನು ಒದ್ದೋಡಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂಬುದಾಗಿ ಮಾನವ ಸಂಕುಲಕ್ಕೆ ಸಂದೇಶ ನೀಡಿದ್ದಾನೆ. ಕಟಪಾಡಿ ಎಸ್.ವಿ.ಕೆ. ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರಥಮ್ ಲಾಕ್ಡೌನ್ ಸಮಯದಲ್ಲಿ ಆವೆಮಣ್ಣಿನ ಕಲಾಕೃತಿಗಳನ್ನು ತನ್ನದೇ ವಿಶಿಷ್ಟ ಕಲ್ಪನೆಯಿಂದ ರಚಿಸಿ ಜನಮೆಚ್ಚುಗೆ ಗಳಿಸಿದ್ದಾನೆ.