ಚಿತ್ರ ಬಿಡುಗಡೆ ಹಂತಕ್ಕೆ ಬಂದಿರುವ ಕಾರಣ ನಿರ್ಮಾಪಕರೂ ಆಗಿರುವ ರೋಹಿತ್ ಪ್ರಚಾರಕ್ಕಾಗಿ ಯಶ್ ಅವರನ್ನು ಭೇಟಿ ಮಾಡಿದ್ದರಂತೆ. ಅದಕ್ಕೆ ಯಶ್ ಅವರಿಂದ ಸಮ್ಮತಿಯೂ ಸಿಕ್ಕಿತಂತೆ. ಆದರೆ, ಅವರು ಒಂದು ಷರತ್ತು ವಿಧಿಸಿದ್ದರಂತೆ. ವಿಭಿನ್ನ ರೀತಿಯಲ್ಲಿ ಜನರಿಗೆ ಚಿತ್ರ ತಲುಪಿಸಲು ಸಂದರ್ಶನ ಮಾದರಿಯಲ್ಲಿ ನಟ, ನಿರ್ಮಾಪಕರಿಗೆ ಯಶ್ ಹಲವು ಪ್ರಶ್ನೆ ಕೇಳಿದರಂತೆ. ಅದಕ್ಕೆ ನಾಜೂಕಾದ ಉತ್ತರವೂ ಸಿಕ್ಕಿತಂತೆ. ಆದರೆ, ನಿರೂಪಣೆ ಮಾಡುವುದು ಕಷ್ಟದ ಕೆಲಸ ಎನ್ನುವುದು ಯಶ್ ಅಂಬೋಣ.