ಉಡುಪಿ: ಬ್ರಹ್ಮಾವರ, ಮಲ್ಪೆ, ಕಾರ್ಕಳ, ಶಂಕರ ನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಹಲವೆಡೆ 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ರಹ್ಮಾವರ ತಾಲ್ಲೂಕಿನ ಹಾರಾಡಿಯ ಗರಡಿ ಮನೆ ಎಂಬಲ್ಲಿ ರಾಮ ಪೂಜಾರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಯಿಲೆಯಿಂದ ಗುಣಮುಖರಾಗದೆ ಮನನೊಂದ ನೀಲಾವರದ ಕೆಲಕುಂಜಾಲಿನ ಗೋಪಾಲ ನಾಯ್ಕ (75) ಎಂಬುವರು ಚಾಂತಾರು ಗ್ರಾಮದ ಮದಗದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದ ಗುರುರಾಜ್ ಶೆಟ್ಟಿ(42) ಮಲ್ಪೆ ಬೀಚ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಪದ್ಮ ಶೇರಿಗಾರ್ತಿ (85) ಮನೆಯ ಎದುರಿಗಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ರಹ್ಮಾವರ ತಾಲ್ಲೂಕಿನ ವಂಡಾರು ಗ್ರಾಮದ ಹಳ್ಳಿಬೈಲು ಬಳಿ ಪ್ರಶಾಂತ ದೇವಾಡಿಗ (31) ಹಾಗೂ ಕಾರ್ಕಳದ ಮುಂಡ್ಕೂರು ಗ್ರಾಮದ ದಡ್ಡುಮನೆಯಲ್ಲಿ ಪ್ರಕಾಶ್ ಪೂಜಾರಿ (44) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.