ಶಾರದಕ್ಕನ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ‘ಹಣವಿದ್ದವರೆಲ್ಲರೂ ಬಡವರಿಗೆ ಸಹಾಯ ಮಾಡುವುದಿಲ್ಲ. ಆದರೆ, ಶಾರದಕ್ಕ ಸ್ವತಃ ಬಡತನದಲ್ಲಿದ್ದರೂ, ಮನೆ ಕಟ್ಟಿಕೊಳ್ಳಲು ಇಟ್ಟುಕೊಂಡಿದ್ದ ₹ 30 ಸಾವಿರವನ್ನು ವ್ಯಯಿಸಿ ಬಡವರಿಗೆ ಅಕ್ಕಿ ಹಂಚಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದರು.