ಜಿಲ್ಲಾ ನಾಗರಿಕ ಸೇವಾ ಸಮಿತಿಯ ಮುಖ್ಯಸ್ಥ ನಿತ್ಯಾನಂದ ವಳಕಾಡು ಮಾತನಾಡಿ, ‘ಗುಂಡಿಬಿದ್ದ ರಸ್ತೆಯಿಂದ ಅನಾರೋಗ್ಯ ಪೀಡಿತ ರೋಗಿಗಳಿಗೆ ಹಾಗೂ ಗರ್ಣಿಣಿಯರಿಗೆ ವಾಹನಗಳಲ್ಲಿ ಕುಳಿತು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅವರ ಸಮಸ್ಯೆಯನ್ನು ಅನಾವರಣಗೊಳಿಸಲು ನಾಗರಿಕ ಸಮಿತಿಯು ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಿದೆ ಎಂದು ತಿಳಿಸಿದರು.