ಬಂಡವಾಳ ಗಳಿಕೆ ತೆರಿಗೆ ಜಾರಿಗೊಳಿಸಿರುವುದರಿಂದ ಸೂಚ್ಯಂಕ ಕುಸಿಯುತ್ತಿದೆ ಎನ್ನುವುದನ್ನು ಸರ್ಕಾರ ಅಲ್ಲಗಳೆದಿದೆ. ‘ಜಾಗತಿಕ ಮಾರುಕಟ್ಟೆ
ಯಲ್ಲಿ ಮಂದಗತಿಯ ವಹಿವಾಟು ನಡೆಯುತ್ತಿದೆ. ಈ ಕಾರಣದಿಂದಾಗಿಯೇ ದೇಶದ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿದೆ. ದೀರ್ಘಾವಧಿಯ ಬಂಡವಾಳ ಗಳಿಕೆ ತೆರಿಗೆಯನ್ನು ಮತ್ತೆ ಜಾರಿಗೊಳಿಸಿರುವುದರಿಂದ ಷೇರುಪೇಟೆ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ’ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್ ಆಧಿಯಾ ಹೇಳಿದ್ದಾರೆ.