ಉಡುಪಿ: ಫುಟ್ಪಾತ್ನಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದವರನ್ನು ಗುರುವಾರ ನಗರಸಭೆ ಅಧಿಕಾರಿಗಳು ತೆರವು ಗೊಳಿಸಿದರು.
ನಗರಸಭೆ ಪೌರಾಯುಕ್ತ ಉದಯ್ಶೆಟ್ಟಿ ನೇತೃತ್ವದ ತಂಡ ಫುಟ್ಪಾತ್ ಒತ್ತುವರಿ ಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿತು. ಪಾದಚಾರಿ ಮಾರ್ಗಗಳಲ್ಲಿ ಜಾಹೀರಾತು ಫಲಕಗಳನ್ನು ಅಡ್ಡಲಾಗಿ ಇಟ್ಟಿದ್ದವರಿಗೆ ದಂಡ ಹಾಕುವ ಎಚ್ಚರಿಕೆ ನೀಡಿ ತೆರವುಗೊಳಿಸಿತು.
ಅಧಿಕಾರಿಗಳು ಏಕಾಏಕಿ ತೆರವು ಕಾರ್ಯ ನಡೆಸಿದ್ದನ್ನು ವಿರೋಧಿಸಿ ಫುಟ್ ಪಾತ್ ವ್ಯಾಪಾರಿಗಳು ವಾಗ್ವಾದ ನಡೆಸಿದರು. ಕಾರ್ಯಾಚರಣೆ ವೇಳೆ ಅಧಿಕಾರಿಗಳಾದ ಕರುಣಾಕರ್, ಧನಂಜಯ್, ಸಂಚಾರ ಠಾಣೆ ಪಿಎಸ್ಐ ಖಾದರ್ ಷಾ ಇದ್ದರು.