ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಜೀ ಅವರಿಗಾದ ತಲ್ಲಣವೇ ಸತ್ಯಾಗ್ರಹ ಪರಿಕಲ್ಪನೆ ಹುಟ್ಟಿಕೊಳ್ಳಲು ಸಾಧ್ಯವಾಯಿತು. ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಲು ಪ್ರೇರಣೆಯಾಯಿತು. ಬಾಪು ಧರ್ಮವನ್ನು ಪ್ರೀತಿಸಬೇಕು, ಆದರೇ ಧರ್ಮಕ್ಕಿಂತ ಇತರ ಧರ್ಮಗಳನ್ನು ಕೀಳು ಎಂದು ಭಾವಿಸಬಾರದು ಎಂದಿದ್ದರು. ಸರ್ವಧರ್ಮ ಸಮಾನತೆ, ಸಹಿಷ್ಣುತೆ ಎಂದು ಸಾರಿದರು. ಆದರೆ, ಪ್ರಸ್ತುತ ಗಾಂಧೀಜಿ ಚಿಂತನೆಗಳನ್ನು ಅನುಕೂಲಕ್ಕೆ ತಕ್ಕಂತೆ ಜಗ್ಗಿಸಿ, ಅಸಮಾನತೆ ಅಸಹಿಷ್ಣುತೆ ಹೆಚ್ಚಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.