ಉಡುಪಿ: ಬ್ರಹ್ಮಾವರ ತಾಲ್ಲೂಕಿನ ವಾರಂಬಳ್ಳಿ ಗ್ರಾಮದ ಧರ್ಮಾವರಂ ಆಡಿಟೋರಿಯಂ ಬಳಿ ಗುರುವಾರ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೊಸನಗರ ತಾಲ್ಲೂಕಿನ ಆಸಿಫ್ ಬಾಷಾ, ರಿಯಾಜ್ ಬಂಧಿತರು. ಆರೋಪಿಗಳಿಂದ 2 ಕೆ.ಜಿ 38 ಗ್ರಾಂ ಗಾಂಜಾ, 2 ಮೊಬೈಲ್, ಒಂದುಕಾರು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸ್ವತ್ತಿನ ಮೌಲ್ಯ ₹ 3,13,500 ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಠಾಣೆಯ ಪಿಎಸ್ಐ ರಾಮಚಂದ್ರ ನಾಯಕ್, ಪಿಎಸ್ಐ ಲಕ್ಷ್ಮಣ, ನಾರಾಯಣ, ಎಎಸ್ಐ ಕೇಶವ ಗೌಡ, ಸಿಬ್ಬಂದಿ ಕೃಷ್ಣಪ್ರಸಾದ್, ಪ್ರಸನ್ನ ಸಾಲ್ಯಾನ್, ಶ್ರೀಧರ್, ಪ್ರವೀಣ, ಪ್ರದೀಪ ಶೆಟ್ಟಿ, ಅರುಣ್ ಶೆಟ್ಟಿ, ಚಾಲಕ ನವೀನಚಂದ್ರ ಪಾಲ್ಗೊಂಡಿದ್ದರು.