ಉಡುಪಿ: ಜಿಲ್ಲೆಯ ಹಲವೆಡೆ ಮಂಗಳವಾರ ಸಾಧಾರಣ ಮಳೆಯಾಗಿದೆ. ಇಡೀ ದಿನ ಮೋಡಕವಿದ ವಾತಾವರಣವಿದ್ದು, ಗಾಳಿಯ ಪ್ರಭಾವ ಜೋರಾಗಿತ್ತು. ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿರುವುದು ಕಂಡುಬಂತು.
ಉಡುಪಿ, ಹೆಬ್ರಿ ಸೇರಿದಂತೆ ಜಿಲ್ಲೆಯಾದ್ಯಂತ ತುಂತುರು ಮಳೆಯಾಗಿದೆ. ಸೋಮವಾರ ಸುರಿದ ಬಿರುಸಿನ ಮಳೆಗೆ ಹಲವೆಡೆ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಾಪು ತಾಲ್ಲೂಕಿನ ಕಳತ್ತೂರು ಹಾಗೂ ಪಲಿಮಾರಿನಲ್ಲಿ ಮನೆಗಳ ಮೇಲೆ ಮರಬದ್ದು ನಷ್ಟ ಸಂಭವಿಸಿದೆ.
ಕಳೆದ 24 ಗಂಟೆಗಳಲ್ಲಿ ಉಡುಪಿಯಲ್ಲಿ 22.7 ಮಿ.ಮೀ, ಕುಂದಾಪುರದಲ್ಲಿ 22.6, ಕಾರ್ಕಳದಲ್ಲಿ 23.4 ಮಿ.ಮೀ ಮಳೆ ಬಿದ್ದಿದ್ದು, ಜಿಲ್ಲೆಯಲ್ಲಿ 2.29 ಸೆ.ಮೀ ಮಳೆಯಾಗಿದೆ.