‘ಕೊರೊನಾ ಮಹಾಮಾರಿಯ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಅಸಾಧ್ಯ. ಆದರೆ, ರಾಜಕೀಯ ವ್ಯಕ್ತಿಗಳ ನಾಮನಿರ್ದೇಶನದ ಸಮಿತಿಯನ್ನು ರಚನೆ ಮಾಡುವುದು ಸರಿಯಾದ ಕ್ರಮವಲ್ಲ. 73ನೇ ತಿದ್ದುಪಡಿಯಲ್ಲಿ ಗ್ರಾಮ ಪಂಚಾಯಿತಿಗೆ ಸದಾಕಾಲ ಚುನಾಯಿತ ಪ್ರತಿನಿಧಿಗಳೇ ಇರಬೇಕು. ಈಗಿರುವ ಪಂಚಾಯಿತಿ ಸದಸ್ಯರ ಆಡಳಿತವನ್ನು ಆರು ತಿಂಗಳು ಮುಂದುವರಿಸಬಹುದು ಅಥವಾ ಆಡಳಿತಾಧಿಕಾರಿಗಳ ನೇಮಕ ಮಾಡಬಹುದು. ನಾಮನಿರ್ದೇಶನ ಸಮಿತಿಯನ್ನು ರಚಿಸಿದರೆ ರಾಜಕೀಯ ಹಸ್ತಕ್ಷೇಪವಾಗಿ, ವಿಕೇಂದ್ರಿಕರಣ ವ್ಯವಸ್ಥೆಗೆ ಮಾರಕವಾಗಲಿದೆ’ ಎಂದರು.