ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌. ಗೋಪಾಲ ಭಂಡಾರಿ ಸ್ಮರಣಾರ್ಥ ರಕ್ತದಾನ ಇಂದು

Last Updated 3 ಜುಲೈ 2022, 2:11 IST
ಅಕ್ಷರ ಗಾತ್ರ

ಕಾರ್ಕಳ: ಎಚ್. ಗೋಪಾಲ್ ಭಾಂಡಾರಿ ಅವರ 3ನೇ ವರ್ಷದ ಪುಣ್ಯಸ್ಮರಣಾರ್ಥ ರಕ್ತದಾನ ಶಿಬಿರವನ್ನು 3ರಂದು ಬೆಳಿಗ್ಗೆ 9.30ರಿಂದ ಕಾರ್ಕಳ ಪೆರ್ವಾಜೆ ಗುರುನಾರಾಯಣ
ಸಭಾವನದಲ್ಲಿ ಆಯೋಜಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಾಗ್ಮಿ’ ಭಾಷಣ ಸ್ಪರ್ಧೆ: ಸಂಧ್ಯಾ, ಶ್ರೀದೇವಿ, ಆದಿತ್ಯಗೆ ಪ್ರಶಸ್ತಿ

ಮಂಗಳೂರು: ಬೈಕಾಡಿ ಪ್ರತಿಷ್ಠಾನ ಆಯೋಜಿಸಿದ್ದ ‘ವಾಗ್ಮಿ’ ಭಾಷಣ ಸ್ಪರ್ಧೆಯಲ್ಲಿ ನೆದರ್ಲೆಂಡ್ಸ್‌ನ ಸಂಧ್ಯಾ ಪೈ, ಪುತ್ತೂರಿನ ಶ್ರೀದೇವಿ ಕೆ ಮತ್ತು ಮಂಗಳೂರಿನ ಆದಿತ್ಯ ಡಿ
ಕ್ರಮವಾಗಿ ಸಾರ್ವಜನಿಕ, ಯುವ
ಮತ್ತು ತರುಣ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ ಎಂದು ಭರತ್‌ರಾಜ್ ತಿಳಿಸಿದರು.

ಸಾರ್ವಜನಿಕ ವಿಭಾಗದಲ್ಲಿ ಕುಂದಾಪುರದ ಸುಮಾ ಸಂಗ್ರಾಮ್ ಮತ್ತು ತೊಕ್ಕೊಟ್ಟಿನ ತ್ರಿವೇಣಿ ಕಿರಣ್‌ ದ್ವಿತೀಯ ಬಹುಮಾನ ಹಂಚಿಕೊಂಡಿದ್ದು ಮಂಗಳೂರಿನ ಸ್ಮಿತಾ ಬಿ.ರಾವ್ ತೃತೀಯ ಸ್ಥಾನ ಗಳಿಸಿದ್ದಾರೆ.

ಯುವ ವಿಭಾಗದಲ್ಲಿ ಮಂಗಳೂರಿನ ಅನನ್ಯ
ಜೀವನ್ ಉಳ್ಳಾಲ್‌ ದ್ವಿತೀಯ, ಬೆಳ್ತಂಗಡಿಯ ಶಾಹಿದ್ ಅಫ್ರಿದಿ ಮತ್ತು ಕುಂದಾಪುರದ ಆದರ್ಶ್ ಕೆಲ ಮೂರನೇ ಬಹುಮಾನ ಗಳಿಸಿದ್ದಾರೆ. ತರುಣ ವಿಭಾಗದ ದ್ವಿತೀಯ ಬಹುಮಾನ ಮಂಗಳೂರಿನ ಪ್ರಾರ್ಥನಾ ಶೆಟ್ಟಿ ಗಳಿಸಿದ್ದು ಸುರತ್ಕಲ್‌ನ ಹಿತಾ ಉಮೇಶ್ ಮೂರನೇ ಸ್ಥಾನ
ಗೆದ್ದಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT