ಬ್ರಹ್ಮಾವರ ತಾಲ್ಲೂಕಿನಲ್ಲಿ ಮಡಿಸಾಲು ಹೊಳೆ ಉಕ್ಕಿ ಹರಿದು ಆರೂರು ಉಪ್ಪೂರು ಬೆಳ್ಮಾರು ಗ್ರಾಮಗಳಲ್ಲಿ ನೆರೆ ಬಂದಿತ್ತು. ಬಳಿಕ ನೆರೆ ತಗ್ಗಿದೆ. ನೀಲಾವರ, ಬಾವಲಿಕುದ್ರು, ಕೂರಾಡಿ, ಬಾರ್ಕೂರು ಪ್ರದೇಶದಲ್ಲಿ ಸೀತಾನದಿ ಉಕ್ಕಿ ಮನೆಗಳು, ಕೃಷಿ ಭೂಮಿ ಜಲಾವೃತ ಗೊಂಡಿದೆ. ಜುಲೈ 9ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ. ಶಿರೂರಿನಲ್ಲಿ 25.6 ಸೆಂ.ಮೀ, ಗೋಳಿಹೊಳೆಯಲ್ಲಿ 25.4 ಸೆಂ.ಮೀ ಮಳೆಯಾಗಿದೆ.