ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ‘ಇನ್ನೂ ಸರ್ಕಾರ ಪೂರ್ಣಗೊಳ್ಳಲು ಎರಡು ವರ್ಷ ಅವಧಿ ಬಾಕಿಯಿದೆ. ಕಾಂಗ್ರೆಸ್ನಲ್ಲಿ ಇಷ್ಟು ಬೇಗ ಪೈಪೋಟಿ ಆಗುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ಪರಮೇಶ್ವರ ಅವರ ಅಭದ್ರತೆ ಕಾಡುತ್ತಿದೆ. ಇನ್ನು ಎರಡು ವರ್ಷ ನೂರಕ್ಕೆ ನೂರರಷ್ಟು ಮುಖ್ಯಮಂತ್ರಿ ಬದಲಾಗುವುದಿಲ್ಲ’ ಎಂದರು.