ಕುಂದಾಪುರ: ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಅನಿಯಮಿತ ಬಳಕೆ, ಸಾಮಾಜಿಕ ಜಾಲತಾಣಗಳ ಪ್ರಚೋದನಾತ್ಮಕ ಸಂಗತಿಗಳು, ಮರೆಯಾಗುತ್ತಿರುವ ಕೂಡು ಕುಟುಂಬ ಕಲ್ಪನೆಗಳು, ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಖಿನ್ನತೆ, ಆತ್ಮಹತ್ಯೆಯ ಕುರಿತು ಅರಿವು ಮೂಡಿಸಲು ಕೇರಳದ ಮಲಪ್ಪುರಂ ಜಿಲ್ಲೆಯಿಂದ ಕಾಶ್ಮೀರಕ್ಕೆ ಇಬ್ಬರು ಯುವಕರು ಕುದುರೆ ಸವಾರಿಯ ಮೂಲಕ ಜಾಗೃತಿ ಯಾತ್ರೆ ಮಾಡುತ್ತಿದ್ದಾರೆ.