<p><strong>ಬ್ರಹ್ಮಾವರ:</strong> ಬೇಸಿಗೆ ರಜೆಯ ಬಳಿಕ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬೆಂಗ್ರೆ ಅಂಗನವಾಡಿ ಕೇಂದ್ರ ವಿಶಿಷ್ಟ ರೀತಿಯಲ್ಲಿ ಪುನರಾರಂಭಗೊಂಡಿತು.</p>.<p>ಅಂಗನವಾಡಿ ಕೇಂದ್ರದ ಮೊದಲ ದಿನವನ್ನು ಮಕ್ಕಳ ಪಾಲಿಗೆ ಹಬ್ಬದಂತೆ ಮಾಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕೇಂದ್ರಕ್ಕೆ ಬಂದ ಪುಟಾಣಿ ಮಕ್ಕಳು ಮತ್ತು ಪೋಷಕರನ್ನು ಶಿಕ್ಷಕಿಯರು ಪುಷ್ಪಸಿಂಚನ, ಆರತಿ ಬೆಳಗಿ ಬರಮಾಡಿಕೊಂಡರು.</p>.<p>ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಕ್ಕಳಿಗೆ ಬಣ್ಣಬಣ್ಣದ ಬಲೂನು, ಸಿಹಿ ತಿಂಡಿ ವಿತರಿಸಿ ಶೈಕ್ಷಣಿಕ ಹಾರೈಸಿದರು. ಮಕ್ಕಳ ನಲಿ– ಕಲಿ, ಆಟ– ಪಾಠದೊಂದಿಗೆ ಮೊದಲ ದಿನದ ಚಟುವಟಿಕೆಗಳು ರಂಗೇರಿದವು.</p>.<p>ಕೋಡಿ ಸಮನ್ವಯ ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ದೀಪಾ ಖಾರ್ವಿ, ಶಾರದಾ ಟಿ. ಕುಂದರ್ ಭಾಗವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಯಮುನಾ ಎಲ್. ಕುಂದರ್ ನಿರೂಪಿಸಿದರು. ಸಹಾಯಕಿ ಸವಿತಾ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-28-1872258411</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ:</strong> ಬೇಸಿಗೆ ರಜೆಯ ಬಳಿಕ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬೆಂಗ್ರೆ ಅಂಗನವಾಡಿ ಕೇಂದ್ರ ವಿಶಿಷ್ಟ ರೀತಿಯಲ್ಲಿ ಪುನರಾರಂಭಗೊಂಡಿತು.</p>.<p>ಅಂಗನವಾಡಿ ಕೇಂದ್ರದ ಮೊದಲ ದಿನವನ್ನು ಮಕ್ಕಳ ಪಾಲಿಗೆ ಹಬ್ಬದಂತೆ ಮಾಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕೇಂದ್ರಕ್ಕೆ ಬಂದ ಪುಟಾಣಿ ಮಕ್ಕಳು ಮತ್ತು ಪೋಷಕರನ್ನು ಶಿಕ್ಷಕಿಯರು ಪುಷ್ಪಸಿಂಚನ, ಆರತಿ ಬೆಳಗಿ ಬರಮಾಡಿಕೊಂಡರು.</p>.<p>ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಕ್ಕಳಿಗೆ ಬಣ್ಣಬಣ್ಣದ ಬಲೂನು, ಸಿಹಿ ತಿಂಡಿ ವಿತರಿಸಿ ಶೈಕ್ಷಣಿಕ ಹಾರೈಸಿದರು. ಮಕ್ಕಳ ನಲಿ– ಕಲಿ, ಆಟ– ಪಾಠದೊಂದಿಗೆ ಮೊದಲ ದಿನದ ಚಟುವಟಿಕೆಗಳು ರಂಗೇರಿದವು.</p>.<p>ಕೋಡಿ ಸಮನ್ವಯ ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ದೀಪಾ ಖಾರ್ವಿ, ಶಾರದಾ ಟಿ. ಕುಂದರ್ ಭಾಗವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಯಮುನಾ ಎಲ್. ಕುಂದರ್ ನಿರೂಪಿಸಿದರು. ಸಹಾಯಕಿ ಸವಿತಾ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-28-1872258411</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>