ನಿಷೇಧಾಜ್ಞೆ ಇದ್ದ ಕಾರಣ ಊರಿಗೆ ತೆರಳಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧನನ್ನು ಹೂಡೆಯ ವೃದ್ಧಾಶ್ರಮಕ್ಕೆ ದಾಖಲಿಸಲಾಗಿತ್ತು. ಕೆಲವು ದಿನಗಳ ಬಳಿಕ ಅನಾರೋಗ್ಯ ಉಲ್ಬಣಿಸಿ ಅವರು ಮೃತಪಟ್ಟಿದ್ದರು. ಶವವನ್ನು ಕೊಂಡೊಯ್ಯುವಂತೆ ವೃದ್ಧಾಶ್ರಮದ ಸಿಬ್ಬಂದಿ ಸಂಬಂಧಿಗಳಿಗೆ ತಿಳಿಸಿದರೂ, ಕೊರೊನಾ ಹರಡುವ ಭಯದಿಂದ ಯಾರೂ ಶವ ತೆಗೆದುಕೊಂಡು ಹೋಗಲು ಬರಲಿಲ್ಲ ಎನ್ನಲಾಗಿದೆ.